ನಾರಿಶಕ್ತಿ ಪುರಸ್ಕೃತರಲ್ಲಿ ಹಾವುಗಳ ಮೊದಲ ರಕ್ಷಕಿ ಎಂಬ ಖ್ಯಾತಿಯ ಹಾಗೂ ಪರಿಸರ ಮತ್ತು ಅರಣ್ಯ ಜೀವಿಗಳ ರಕ್ಷಣೆಗಾಗಿ ಸ್ಥಾಪಿಸಿರುವ ಸಾಯ್ರೇ ವಂಚರೆ ಫೌಂಡೇಷನ್ ಸಂಸ್ಥಾಪಕಿ ವನಿತಾ ಜಗದೇವೊ ಬರೋಡೆ, ಕಥಕ್ ನೃತ್ಯಗಾರ್ತಿ ಸಾಯ್ಲೀ ನಂದಕಿಶೋರ್ ಅಗವಾನೆ, ಸಾವಯವ ಕೃಷಿ ಮಾಡುವ ಉಷಾಬೆನ್ ದಿನೇಶ್ ಭಾಯಿ ವಾಸವ ಸೇರಿದಂತೆ ಇತರರು ಸೇರಿದ್ದಾರೆ. ಜಗದೇವೋ ಬರೋಡೆ ಅವರು 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿ, ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಜತೆಗೆ ಹಾವು ಕಚ್ಚಿದಾಗ ಹೇಗೆ ಶುಶ್ರೂಷೆ ಮಾಡಬೇಕು ಸೇರಿದಂತೆ ಹಾವಿಗೆ ಸಂಬಂಧಿಸಿದ ಇನ್ನಿತರ ಜಾಗೃತಿ ಮೂಡಿಸುವ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.