ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಮದ್ಯದಂಗಡಿ ಮೇಲೆ ಸಗಣಿ ಎರಚಿದ ಉಮಾಭಾರತಿ

Last Updated 15 ಜೂನ್ 2022, 11:33 IST
ಅಕ್ಷರ ಗಾತ್ರ

ಭೋಪಾಲ್/ನಿವಾರಿ: ಮಧ್ಯಪ್ರದೇಶದಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸುತ್ತಿರುವ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ನಿವಾರಿ ಜಿಲ್ಲೆಯಲ್ಲಿರುವ ಮದ್ಯದಂಗಡಿ ಮೇಲೆ ಸಗಣಿ ಎರಚಿದ್ದಾರೆ.

ರಾಮರಾಜ ದೇವಸ್ಥಾನ ಇರುವ ಓರಛಾ ನಗರದಲ್ಲಿನ ಮದ್ಯದಂಗಡಿ ಮೇಲೆ ಸಗಣಿ ಎರಚುತ್ತಿರುವ ವಿಡಿಯೊದಲ್ಲಿ, ’ನೋಡಿ ನಾನು ಮದ್ಯದಂಗಡಿ ಮೇಲೆ ಸಗಣಿ ಎರಚುತ್ತಿದ್ದೇನೆ. ಆದರೆ, ಕಲ್ಲುಗಳನ್ನು ಅಲ್ಲ‘ ಎಂದು ಉಮಾಭಾರತಿ ಅವರು ಹೇಳಿದ್ದಾರೆ.

ಪವಿತ್ರ ಓರಛಾ ಪಟ್ಟಣದಲ್ಲಿ ಮದ್ಯದಂಗಡಿಗೆ ಅನುಮೋದನೆಯಿಲ್ಲ. ಈ ಪವಿತ್ರ ನಗರದಲ್ಲಿ ಇಂಥ ಮದ್ಯದಂಗಡಿ ಇರುವುದು ಅಪರಾಧ ಎಂದು ಅವರು ತಿಳಿಸಿದ್ದಾರೆ.ಆದರೆ, ಈ ಮದ್ಯದಂಗಡಿಗೆ ಸರ್ಕಾರದ ಅನುಮತಿಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಭೋಪಾಲ್‌ನಲ್ಲಿ ಮದ್ಯದಂಗಡಿ ಮೇಲೆ ಕಲ್ಲು ಎಸೆದಿದ್ದ ವಿಡಿಯೊ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT