ಜಯಲಲಿತಾ ಅವರ ವಿರುದ್ಧವೂ ಡಿಎಂಕೆ ಹಿಂದೆ ಇಂತಹ ಹೇಳಿಕೆಗಳನ್ನು ನೀಡಿದೆ ಎಂದೂ ಶಾ ನೆನಪಿಸಿದರು. ತಮಿಳುನಾಡಿನ ಚುನಾವಣೆಯು ಅಭಿವೃದ್ಧಿ ಪಥದಲ್ಲಿ ಸಾಗುವ ಎನ್ಡಿಎ ಮತ್ತು ಭ್ರಷ್ಟಾಚಾರ ಹಾಗೂ ವಂಶಾಡಳಿತದ ಯುಪಿಎ ನಡುವಣ ಸಮರ ಎಂದು ಅವರು ಬಣ್ಣಿಸಿದರು. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ತಮಿಳುನಾಡಿನ ಬಗ್ಗೆ ಕಳಕಳಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.