ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ ಜುಲೈ 1 ರಂದು ನೂಪುರ್ ಮನವಿಯನ್ನು ತಳ್ಳಿಹಾಕಿತ್ತು. ತಮ್ಮ ವಿರುದ್ಧದ ಎಫ್ಐಆರ್ಗಳನ್ನು ಒಂದೇ ಕಡೆಗೆ ವರ್ಗಾಯಿಸುವಂತೆ ಕೋರಿದ್ದ ಮನವಿ ತಿರಸ್ಕರಿಸಿದ್ದ ಕೋರ್ಟ್, ಹಿಡಿತವಿಲ್ಲದ ನಾಲಿಗೆ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಕಿಡಿಕಾರಿತ್ತು. ಇದೀಗ, ಅದೇ ಅರ್ಜಿಯ ಮರುಪರಿಗಣನೆಗೆ ನೂಪುರ್ ಕೋರಿದ್ದಾರೆ.