ನವದೆಹಲಿ: ಸುದ್ದಿ ನಿರೂಪಕಿ ನಾವಿಕ ಕುಮಾರ್ ವಿರುದ್ಧ ದೇಶದಾದ್ಯಂತ ದಾಖಲಾಗಿದ್ದ ಎಫ್ಐಆರ್ಗಳನ್ನು ಒಗ್ಗೂಡಿಸಿ, ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ವರ್ಗಾಯಿಸಿದೆ. ಪ್ರವಾದಿ ಮೊಹಮ್ಮದ್ ಕುರಿತು ಬಿಜೆಪಿಯ ಮಾಜಿ ವಕ್ತಾರೆ ಸೂಪುರ್ ಶರ್ಮಾ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದ ಟಿ.ವಿ ಚರ್ಚೆಯನ್ನು ನಾವಿಕ ಅವರು ನಿರೂಪಿಸುತ್ತಿದ್ದರು.