ಈ ಗಲಾಟೆಯ ಮಧ್ಯದಲ್ಲೇ ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಅವರ ಸಂಪುಟ ಸಚಿವರು 2022-2023ರ ಸಾಲಿನಲ್ಲಿ ತಮ್ಮ ಇಲಾಖೆಗಳಿಗೆ ಬೇಕಾದ ಹೆಚ್ಚುವರಿ ಅನುದಾನಕ್ಕಾಗಿ ಇಟ್ಟ ಬೇಡಿಕೆಗಳನ್ನು ಸದನವು ಅಂಗೀಕರಿಸಿತು. ಮುಖ್ಯಮಂತ್ರಿ ಮಂಡಿಸಿದ ಧನವಿನಿಯೋಗ ವಿಧೇಯಕವನ್ನೂ ಸದನ ಅಂಗೀಕರಿಸಿತು. ಕೇವಲ 24 ನಿಮಿಷಗಳ ಅವಧಿಗೆ ಅಧಿವೇಶನ ನಡೆಸಿದ ಸ್ಪೀಕರ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.