ಪುಣೆಯ 38 ವರ್ಷ ವಯಸ್ಸಿನ ವಿನಯ್ ನಾಯಕ್ ಭಾರೀ ಮೊತ್ತದ ಬಿಟ್ಕಾಯಿನ್ ಕರೆನ್ಸಿ ವಹಿವಾಟು ನಡೆಸುತ್ತಿರುವುದನ್ನು ತಿಳಿದು ಕೊಂಡಿದ್ದ ಕಾನ್ಸ್ಟೆಬಲ್ ದಿಲೀಪ್ ತುಕಾರಾಂ ಖಂಡಾರೆ, ಅವರ ಅಪಹರಣ ಮಾಡಲು ಯೋಜನೆ ರೂಪಿಸಿದ್ದರು. ದಿಲೀಪ್ ಮತ್ತು ಸಹಚರರು ಸೇರಿ ಜನವರಿ 14ರಂದು ವಿನಯ್ ಅವರ ಅಪಹರಣ ನಡೆಸಿ, ಅವರಲ್ಲಿರುವ ₹300 ಕೋಟಿ ಮೌಲ್ಯದ ಡಿಜಿಟಲ್ ಕರೆನ್ಸಿಗಳನ್ನು ವರ್ಗಾಯಿಸುವುದು ಹಾಗೂ ₹8 ಲಕ್ಷ ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದರು.