'ಹುತಾತ್ಮರ ದಿನದಂದು (ಮಾರ್ಚ್ 23) ಸಹಾಯವಾಣಿಗೆ ಚಾಲನೆ ನೀಡುತ್ತಿದ್ದು, ಅದಕ್ಕೆ ನಾನು ನನ್ನ ಖಾಸಗಿ ವಾಟ್ಸ್ಆ್ಯಪ್ ಸಂಖ್ಯೆಯನ್ನೇ ನೀಡುತ್ತಿದ್ದೇನೆ. ಪಂಜಾಬ್ನಲ್ಲಿ ನಿಮಗೆ ಯಾರಾದರೂ ಲಂಚಕ್ಕಾಗಿ ಬೇಡಿಕೆ ಇಟ್ಟರೆ, ವಿಡಿಯೊ ಅಥವಾ ಆಡಿಯೊ ರೆಕಾರ್ಡ್ ಮಾಡಿಕೊಳ್ಳಿ ಹಾಗೂ ಆ ಸಂಖ್ಯೆಗೆ ಕಳುಹಿಸಿ. ನಮ್ಮ ಕಚೇರಿಯು ಅದನ್ನು ಪರಿಶೀಲಿಸುತ್ತದೆ ಹಾಗೂ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಭಗವಂತ ಮಾನ್ ಹೇಳಿದ್ದಾರೆ.