ಇದೇ ವೇಳೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅಮರಿಂದರ್ ಸಿಂಗ್, 'ಈ ದೇಶದಲ್ಲಿ ಸಂವಿಧಾನವಿದೆಯೇ? ಸೆಡ್ಯೂಲ್ -7ರ ಅಡಿಯಲ್ಲಿ ಕೃಷಿಗೆ ಸಂಬಂಧಿಸಿದ ವಿಷಯಗಳು ರಾಜ್ಯ ಸರ್ಕಾರದ ಅಧೀನಕ್ಕೆ ಬರುತ್ತವೆ. ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಏಕೆ ಬದಲಾಯಿಸಿತು? ಗೊಂದಲದ ನಡುವೆಯೇ ಹೊಸ ಕಾಯ್ದೆಗಳನ್ನು ಏಕೆ ಅಂಗೀಕರಿಸಲಾಯಿತು?' ಎಂದು ಪ್ರಶ್ನಿಸಿದ್ದಾರೆ.