ಚಂಡೀಗಢ: ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್ಪಾಲ್ ಸಿಂಗ್ನ ಪತ್ತೆ ಕಾರ್ಯಾಚರಣೆಯು ಮೂರನೇ ದಿನವೂ ಮುಂದುವರಿದಿದೆ. ಈ ವೇಳೆ ‘ರಾಜ್ಯದಲ್ಲಿ ಮೊಬೈಲ್ ಅಂತರ್ಜಾಲ ಹಾಗೂ ಸಂದೇಶ ರವಾನೆಗೆ ಹೇರಿದ್ದ ನಿರ್ಬಂಧವನ್ನು ಮಂಗಳವಾರ ಸಂಜೆಯವರೆಗೂ ವಿಸ್ತರಿಸಲಾಗುವುದು’ ಎಂದು ಪಂಜಾಬ್ ಸರ್ಕಾರ ಹೇಳಿದೆ.
ಅಂತರ್ಜಾಲ ಹಾಗೂ ಸಂದೇಶ ಸೇವೆಯನ್ನು ಭಾನುವಾರದ ಸಂಜೆಯವರೆಗೂ ನಿರ್ಬಂಧಿಸಿ ಶನಿವಾರ ಆದೇಶಿಸಲಾಗಿತ್ತು. ಇದನ್ನು ನಂತರ ಸೋಮವಾರ ಸಂಜೆವರೆಗೂ ವಿಸ್ತರಿಸಲಾಗಿತ್ತು. ಬ್ಯಾಂಕ್, ಆಸ್ಪತ್ರೆ ಹಾಗೂ ಇತರ ಅಗತ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಕಾರಣ ಬ್ರಾಡ್ಬ್ಯಾಂಡ್ ಸೇವೆಗೆ ನಿರ್ಬಂಧ ಹೇರಲಾಗಿಲ್ಲ.