ಚಂಡೀಗಡ: ಪಂಜಾಬ್ ಸರ್ಕಾರ ಇನ್ಮುಂದೆ ಅಲ್ಲಿನ ಭತ್ತದ ಬೆಳಗಾರರಿಗೆ ಪ್ರತಿ ಎಕರೆಗೆ ₹1,500 ಸಹಾಯಧನ ನೀಡಲು ನಿರ್ಧರಿಸಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಡಿಯೊ ಸಂದೇಶದಲ್ಲಿ ಈ ವಿಚಾರ ಪ್ರಕಟಿಸಿದ್ದಾರೆ.
ನೇರ ಭತ್ತದ ಬಿತ್ತನೆ (ಡಿಎಸ್ಆರ್) ವಿಧಾನದ ಮೂಲಕ ರೈತರು ತಮ್ಮ ಹೊಲದಲ್ಲಿ ಭತ್ತ ಬಿತ್ತಿದರೆ ಅವರಿಗೆ ಎಕರೆಗೆ ₹1,500 ನೀಡಲಾಗುವುದು ಎಂದಿದ್ದಾರೆ.
ಡಿಎಸ್ಆರ್ ವಿಧಾನವೂ ನೂತನ ಕೃಷಿ ಪದ್ದತಿಯಾಗಿದ್ದು, ಇದರಿಂದ ಏಕಕಾಲದಲ್ಲಿ ಭತ್ತದ ಬಿತ್ತನೆ ಹಾಗೂ ಕಳೆನಾಶಕವನ್ನು ಹಾಕಬಹುದು. ಸಾಂಪ್ರದಾಯಿಕ ಭತ್ತದ ನಾಟಿಗಿಂತ ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.