ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಪಂಜಾಬ್ ಸಾರಿಗೆ ಸಚಿವರು ಸಂಚಾರ ನೀತಿ, ನಿಯಮಗಳನ್ನುಸಾರ್ವಜನಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಾಗೆಯೇ, ಸಚಿವರೇ ಹೀಗೆ ವರ್ತಿಸಿದರೆ, ನಿಯಮಗಳನ್ನು ಪಾಲಿಸುವಂತೆ ಅವರು ನಾಗರಿಕರಿಗೆ ಹೇಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.