ನವದೆಹಲಿ: ಕುತುಬ್ ಮಿನಾರ್ನಲ್ಲಿ ಇದೆ ಎನ್ನಲಾಗಿರುವ ದೇಗುಲದ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನ ದೇವತೆಗಳ ವಿಗ್ರಹ ಪುನಃ ಪ್ರತಿಷ್ಠಾಪಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿರುವ ಇಲ್ಲಿನ ನ್ಯಾಯಾಲಯ ಡಿಸೆಂಬರ್ 12ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.
ಕುನ್ವಾರ್ ಮಹೇಂದರ್ ಧ್ವಜ್ ಪ್ರತಾಪ್ ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಸೆಪ್ಟೆಂಬರ್ 20ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಂಗ್ ಮೇಲ್ಮನವಿ ಸಲ್ಲಿಸಿದ್ದರು.
‘ಮೇಲ್ಮನವಿದಾರರ ವಾದ ಆಲಿಸಲಾಗಿದೆ. ಡಿಸೆಂಬರ್ 12ಕ್ಕೆ ತೀರ್ಪು ಪ್ರಕಟಿಸಲಾಗುತ್ತದೆ’ ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ದಿನೇಶ್ ಕುಮಾರ್ ಹೇಳಿದ್ದಾರೆ.