ಹರಿಯಾಣದ ಹಿಸಾರ್ನಲ್ಲಿ ಪ್ರತಿಭಟಿಸುತ್ತಿದ್ದ ವೇಳೆ, ಪ್ರತಿಕೃತಿ ದಹಿಸಲುರೈತರು ಮುಂದಾದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಯಿತು. ಮೊದಲು ಚಕ್ಕಾ ಜಾಮ್ (ರಸ್ತೆ ತಡೆ) ನಡೆಸಲು ನಿರ್ಧರಿಸಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ತೀಜ್ ಹಬ್ಬ ಇರುವುದರಿಂದ ರಸ್ತೆತಡೆ ಯೋಜನೆಯನ್ನು ಕೈಬಿಡಲಾಯಿತು ಎಂದು ಹರಿಯಾಣದ ರೈತರು ಹೇಳಿದರು.