ನವದೆಹಲಿ: ಪ್ರಯಾಣಿಕರೊಬ್ಬರು ರೈಲಿನ ಅಲಾರಾಂ ಚೈನ್ ಎಳೆದಿದ್ದರಿಂದ ನದಿಯೊಂದರ ಸೇತುವೆಯ ಮೇಲೆ ನಿಂತ ರೈಲನ್ನು ಸಹಾಯಕ ಲೋಕೊಪೈಲಟ್ ಜೀವದ ಹಂಗು ತೊರೆದು ಮರುಚಾಲು ಮಾಡುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವಾಲಯ ಶನಿವಾರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಕೇಂದ್ರ ರೈಲ್ವೇಯ ಸಹಾಯಕ ಲೋಕೊಪೈಲಟ್ ಸತೀಶ್ ಕುಮಾರ್ ಅವರು ‘ಗೋದಾನ್ ಎಕ್ಸ್ಪ್ರೆಸ್’ನ ಎಂಜಿನ್ನ ಕೆಳಗೆ ಹೋಗಿ ಅಲಾರಾಂ ಸರಪಳಿಯನ್ನು ಮರುಹೊಂದಿಸುತ್ತಿರುವುದು ವಿಡಿಯೊದಲ್ಲಿದೆ.
‘ಅನಿವಾರ್ಯ ಕಾರಣವಿಲ್ಲದೆ ಸರಪಳಿಯನ್ನು ಎಳೆಯುವುದರಿಂದ ಹಲವರಿಗೆ ತೊಂದರೆಯಾಗುತ್ತದೆ’ ಎಂದು ರೈಲ್ವೆ ಹೇಳಿದೆ.
ತುರ್ತು ಸಂದರ್ಭದಲ್ಲಿ ಮಾತ್ರ ಸರಪಳಿ ಎಳೆಯುವಂತೆ ರೈಲ್ವೆ ಮನವಿ ಮಾಡಿಕೊಂಡಿದೆ.
Pulling the Alarm Chain for no reason can cause trouble to many!
Satish Kumar, Asst. Loco Pilot of CR,took the risk of resetting Alarm Chain of Godan Express,halted over the River Bridge between Titwala & Khadavli Station.