ಇದರ ಜೊತೆ, ಗಂಗಾ ಮತ್ತು ಯಮುನಾ ನದಿ ತೀರಗಳಲ್ಲಿ ಮೃತ ದೇಹಗಳನ್ನು ಸುಡುವ ಮತ್ತು ಭಸ್ಮವನ್ನು ನದಿಗೆ ಬಿಡುವ ಕುರಿತು ನಿರ್ದಿಷ್ಟವಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಬೇಕು. ಅವೈಜ್ಞಾನಿಕ ಪದ್ಧತಿಯಲ್ಲಿ ಈ ಕ್ರಿಯೆಗಳು ನಡೆದರೆ ಕೊರೊನಾ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ.