‘ಆದರೆ, ಸರ್, ನೀವು ಪ್ರಧಾನ ಮಂತ್ರಿ’ ಎಂದು ಹೇಳಿದಾಗ, ‘ಖಂಡಿತ. ಆದರೆ, ‘ಈ ಪ್ರಕ್ರಿಯೆಯ ಕುರಿತು ನನಗೆ ತಿಳಿಸಿಲ್ಲ’ ಎಂದು ರಾಜೀವ್ ಅವರು ಪ್ರತಿಕ್ರಿಯಿಸಿದ್ದರು. ಈ ನಡೆಗೆ ಅರುಣ್ (ನೆಹರು), ಫೋತೆದಾರ್ (ಮಖಾನ್ ಲಾಲ್) ಅವರೇ ಕಾರಣ ಎಂಬ ಸಂಶಯವಿದೆ. ಪರಿಶೀಲನೆ ನಡೆಸುತ್ತಿದ್ದೇನೆ. ಅದು ನಿಜವಾಗಿದ್ದರೆ, ಕ್ರಮ ತೆಗೆದುಕೊಳ್ಳುವೆ’ ಎಂದಿದ್ದರು. ಕೆಲವೇ ದಿನಗಳಲ್ಲಿ ರಾಜೀವ್ ಅವರ ಸೋದರ ಸಂಬಂಧಿಯಾಗಿದ್ದ ನೆಹರೂ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಎಂದೂ ಹಬೀಬುಲ್ಲಾ ತಿಳಿಸಿದ್ದಾರೆ.