ಕಾಂಗ್ರೆಸ್ ಪಕ್ಷವು ದಶಕಗಳಿಂದ ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿತ್ತು. ಇದು ಆ ಪಕ್ಷದ ಅಭಿವೃದ್ಧಿ ವಿರೋಧಿ, ಈಶಾನ್ಯ ರಾಜ್ಯಗಳ ವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಮಣಿಪುರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇಂದು ಮಣಿಪುರವು ಅಭಿವೃದ್ಧಿಯಿಂದಾಗಿ ಗುರುತಿಸಿಕೊಂಡಿದೆಯೇ ಹೊರತು ಹಿಂಸೆಯಿಂದಲ್ಲ. ಅಭಿವೃದ್ಧಿಯ ಆತ್ಮವಿಶ್ವಾಸವೀಗ ರಾಜ್ಯದಲ್ಲಿ ಕಾಣಿಸುತ್ತಿದೆ ಎಂದು ರಾಜನಾಥ್ ಹೇಳಿರುವುದಾಗಿ ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.