ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿಯಾಗಿ ಜೆಡಿಯುನ ಹರಿವಂಶ ಸಿಂಗ್ ಅವರು ಸೋಮವಾರ ಆಯ್ಕೆ ಆಗಿದ್ದಾರೆ. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಆರ್ಜೆಡಿಯ ಮನೋಜ್ ಕೆ. ಝಾ ಅವರು ಕಣದಲ್ಲಿದ್ದರು.ಎನ್ಡಿಎ ಅಭ್ಯರ್ಥಿಯ ವಿರುದ್ಧ ಗೆಲ್ಲುವಷ್ಟು ಮತಗಳು ಇಲ್ಲದ ಕಾರಣ ಮತ ವಿಭಜನೆಗೆ ವಿರೋಧ ಪಕ್ಷಗಳು ಕೋರಲಿಲ್ಲ. ಹಾಗಾಗಿ, ಹರಿವಂಶ ಅವರು ಧ್ವನಿಮತದಿಂದ ಆಯ್ಕೆ ಆಗಿದ್ದಾರೆ ಎಂದು ಘೋಷಿಸಲಾಯಿತು.