ಮುಂಬೈ: ನಟಿ ಕಂಗನಾ ರನೌತ್ ಅವರ ಬಗ್ಗೆ ಮಾತನಾಡುವುದನ್ನುನಾವು ನಿಲ್ಲಿಸಿದ್ದೇವೆ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತಿಳಿಸಿದ್ದಾರೆ.
ಕಂಗನಾ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳುಹಾಗೂ ಎಲ್ಲರ ಪ್ರತಿಕ್ರಿಯೆಗಳನ್ನು ನಾವು ಗಮನಿಸುತ್ತಿದ್ದೇವೆ. ಅವರ (ಕಂಗನಾ) ಹಿಂದಿರುವುದು ಯಾವ ರಾಜಕೀಯ ಪಕ್ಷ ಮತ್ತು ಯಾವ ವ್ಯಕ್ತಿ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
We've stopped talking about the Kangana Ranaut issue. But we're taking note of everything & every action which precipitates, in this matter. We'll understand which political party and which individual, think what, of our great state: Sanjay Raut, Shiv Sena leader & Rajya Sabha MP pic.twitter.com/OR2nZrohI0
ನೌಕಾಪಡೆಯ ನಿವೃತ್ತ ಅಧಿಕಾರಿಯ ಮೇಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ‘ಮಹಾರಾಷ್ಟ್ರ ದೊಡ್ಡ ರಾಜ್ಯವಾಗಿದೆ. ಇಲ್ಲಿ ಕಾನೂನನ್ನು ಯಾವಾಗಲೂ ಗೌರವಿಸಲಾಗುತ್ತದೆ. ಯಾವುದೇ ಮುಗ್ಧ ವ್ಯಕ್ತಿಯ ಮೇಲೆ ಹಲ್ಲೆ ಮಾಡಬಾರದು. ಇದು ಸರ್ಕಾರದ ನಂಬಿಕೆಯಾಗಿದೆ’ ಎಂದಿದ್ದಾರೆ.
‘ಮುಂಬರುವ ಸಂಸತ್ ಅಧಿವೇಶನದಲ್ಲಿ ಇಂಡೋ–ಚೀನಾ ಗಡಿ ಸಮಸ್ಯೆ, ಜಿಎಸ್ಟಿ, ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ’ ಎಂದು ಹೇಳಿದ್ದಾರೆ.
In the upcoming parliamentary session, I would like to discuss Indo-China border issues, the GST, rising unemployment among other things: Sanjay Raut, Rajya Sabha MP & Shiv Sena leader pic.twitter.com/FECdOH8gOf