ಜಂತರ್ ಮಂತರ್ನಲ್ಲಿ ನಡೆಯುತ್ತಿರುವ 'ಸತ್ಯಾಗ್ರಹ'ದಲ್ಲಿ ಭಾನುವಾರ 'ಅಗ್ನಿಪಥ' ವಿರೋಧಿಸಿ ಹೋರಾಡುತ್ತಿರುವ ಯುವ ಸಮುದಾಯವನ್ನು ಉದ್ದೇಶಿಸಿಪ್ರಿಯಾಂಕಾ ಗಾಂಧಿ ಮಾತನಾಡಿದರು. ನಿಮಗಿಂತ ದೊಡ್ಡ ದೇಶಭಕ್ತರು ಬೇರೆ ಇಲ್ಲ. ನಿಮಗೊಂದು ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಕಣ್ಣುಗಳನ್ನು ತೆರೆಯಿರಿ. ನಕಲಿ ರಾಷ್ಟ್ರವಾದಿಗಳನ್ನು ಮತ್ತು ನಕಲಿ ದೇಶಭಕ್ತರನ್ನು ಗುರುತಿಸಿ. ಸಂಪೂರ್ಣ ದೇಶ ನಿಮ್ಮೊಂದಿಗಿದೆ. ನಿಮ್ಮ ಹೋರಾಟದ ಜೊತೆ ಕಾಂಗ್ರೆಸ್ ಇದೆ ಎಂದು ಹುರಿದುಂಬಿಸಿದರು.