ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳ ಬಿಡುಗಡೆ ವಿರೋಧಿಸಿ ದನಿ ಎತ್ತದೆ ಮೃದುಧೋರಣೆ ತಳೆದಿರುವ ತಮಿಳುನಾಡು ಕಾಂಗ್ರೆಸ್ ಘಟಕದ (ಟಿಎನ್ಸಿಸಿ) ಅಧ್ಯಕ್ಷಕೆ.ಎಸ್. ಅಳಗಿರಿ ವಿರುದ್ಧ ಪಕ್ಷದ ಹಿರಿಯ ನಾಯಕರು ಸಿಡಿದೆದ್ದಿದ್ದಾರೆ. ಅಧಿಕಾರಕ್ಕಾಗಿ ಟಿಎನ್ಸಿಸಿ ಮತ್ತು ಆಡಳಿತ ಪಕ್ಷ ಡಿಎಂಕೆ ನಡುವೆ ಹೊಂದಾಣಿಕೆ ಇದ್ದು, ಹಂತಕರ ಬಿಡುಗಡೆಯನ್ನು ಅಳಗಿರಿ ವಿರೋಧಿಸುತ್ತಿಲ್ಲವೆಂದು ಅಸಮಾಧಾನಗೊಂಡಿರುವನಾಯಕರುಒಬ್ಬೊಬ್ಬರೇ ಪಕ್ಷ ತ್ಯಜಿಸಲಾರಂಭಿಸಿದ್ದಾರೆ.