‘ಹಿರಿಯ ಪತ್ರಕರ್ತ ಸಿದ್ದಿಕಿ ಕಪ್ಪನ್ azhimukham.com ಸೇರಿದಂತೆ ದೆಹಲಿ ಘಟಕದ ಹಲವು ಮಲಯಾಳಂ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಸಂಘದ ಕಾರ್ಯದರ್ಶಿ. ಉತ್ತರ ಪ್ರದೇಶದ ‘ಹಾಥರಸ್ ಪರಿಸ್ಥಿತಿ’ಯನ್ನು ವರದಿ ಮಾಡಲು ತೆರಳುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕರ್ತವ್ಯನಿರ್ವಹಿಸಲು ಹಾಥರಸ್ಗೆ ತೆರಳುತ್ತಿದ್ದರು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಸಂಘದ ಅಧ್ಯಕ್ಷ ಮಿಜೊ ಜೋಸ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.