ಶ್ರೀನಗರ: ‘ಉಗ್ರರ ಗುಂಡಿಗೆ ಗುರಿಯಾಗಿದ್ದ ಕೃಷ್ಣ ಧಾಬಾ ಹೋಟೆಲ್ನ ಮಾಲೀಕನ ಮಗ ಭಾನುವಾರ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಕಳೆದ 10 ದಿನಗಳಿಂದ ಆಕಾಶ್ ಮೆಹ್ರಾ ಅವರು ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.
‘ಫೆಬ್ರುವರಿ 17ರಂದು ಉಗ್ರರು ಆಕಾಶ್ ಮೆಹ್ರಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಮುಸ್ಲಿಂ ಜಾನ್ಭಾಸ್ ಫೋರ್ಸ್ ಉಗ್ರ ಸಂಘಟನೆಯು ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ. ಈಗಾಗಲೇ ಈ ಪ್ರಕರಣದಡಿ ಮೂವರನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.