ನವದೆಹಲಿ: ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದರೆ, ಬಿಜೆಪಿಯನ್ನು 100 ಸ್ಥಾನಗಳಿಗೆ ಕಟ್ಟಿಹಾಕಲು ಸಾಧ್ಯವಿದೆ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ.
ಬಿಹಾರದ ಪೂರ್ಣಿಯಾದಲ್ಲಿ ಮಹಾಮೈತ್ರಿಕೂಟದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕಾಂಗ್ರೆಸ್ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು. ‘ನನ್ನ ಸಲಹೆಯನ್ನು ಪರಿಗಣಿಸಿದರೆ ಇದು ಸಾಧ್ಯ. ನಿರ್ಧರಿಸದೇ ಇದ್ದರೆ ಏನಾಗಬಹುದು ಎಂಬುದು ನಿಮಗೆ ಗೊತ್ತಿದೆ’ ಎಂದು ನಿತೀಶ್ ಹೇಳಿದ್ದಾರೆ.