ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿರುವ ಯೋಗಿ,ʼಜನಸಂಖ್ಯೆಯ ಹೆಚ್ಚಳವು ಸಮಾಜದಲ್ಲಿ ಅಸಮಾನತೆಯಂತಹ ಪ್ರಮುಖ ಸಮಸ್ಯೆಗಳು ತಲೆದೋರಲು ಪ್ರಮುಖ ಕಾರಣವಾಗಿದೆ. ಮುಂದುವರಿದ ಸಮಾಜ ಕಟ್ಟಲು ಜನಸಂಖ್ಯೆಯನ್ನು ನಿಯಂತ್ರಿಸುವುದೇ ಪ್ರಾಥಮಿಕ ಕಟ್ಟುಪಾಡಾಗಬೇಕು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ನಾವು ಮತ್ತು ಸಮಾಜವನ್ನು ಜಾಗೃತಗೊಳಿಸುವಪ್ರತಿಜ್ಞೆಯನ್ನು ಈ ಬಾರಿಯ ʼವಿಶ್ವ ಜನಸಂಖ್ಯಾ ದಿನʼದಂದುಮಾಡೋಣʼ ಎಂದು ಕರೆ ನೀಡಿದ್ದಾರೆ.