ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಗುವಾಹಟಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ’ಅಸ್ಸಾಂನಲ್ಲಿ ಹಿಂದಿ ಮಾತನಾಡುವ ಮತದಾರರನ್ನು ಪಕ್ಷ ಗುರಿಯಾಗಿಸಿಕೊಳ್ಳುತ್ತದೆ. ಅಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇಕಡ 5ರಷ್ಟು. ಅದರಲ್ಲಿ ಬಹುತೇಕರ ಮೂಲ ಬಿಹಾರ, ಉತ್ತರಪ್ರದೇಶ ಹಾಗೂ ಜಾರ್ಖಂಡ್ ಆಗಿದೆ. ಬಿಜೆಪಿ ಮತ್ತು ಆರ್ಎಸ್ಎಸ್ನಂತಹ ವಿಭಜಕ ಶಕ್ತಿಗಳ ಬೆದರಿಕೆ ವಿರುದ್ಧ ಅವರನ್ನು ಒಟ್ಟುಗೂಡಿಸುತ್ತೇವೆ. ರಾಜ್ಯದ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳ ವಿರುದ್ಧವಿರುವ ಪಕ್ಷಗಳ ನೆರವನ್ನು ಆರ್ಜೆಡಿ ಪಡೆದುಕೊಳ್ಳುತ್ತದೆ‘ ಎಂದು ಹೇಳಿದ್ದಾರೆ.