ಎಸ್ಪಿ ನೇತೃತ್ವದ ಮೈತ್ರಿಕೂಟ ಬಹುಮತ ಸಾಧಿಸಲಿದ್ದು, ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, 'ಮೂರನೇ ಹಂತದಲ್ಲಿ ಖಾತೆ ತೆರೆಯುವುದಕ್ಕೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ. ಆ ಪಕ್ಷವುಮೊದಲ ಹಂತದಲ್ಲಿ ಸ್ತಬ್ಧವಾಗಿತ್ತು. ಎರಡನೇ ಹಂತದಲ್ಲಿ ಮೌನವಾಗಿದೆ ಮತ್ತು ಮೂರನೇ ಹಂತದಲ್ಲಿ ಶೂನ್ಯವಾಗಲಿದೆ' ಎಂದು ವ್ಯಂಗ್ಯವಾಡಿದ್ದಾರೆ.