ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪಠಣ್ ಪ್ರದೇಶದಲ್ಲಿ ಶುಕ್ರವಾರ ಅಪರಿಚಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸರಪಂಚರೊಬ್ಬರು ಹತ್ಯೆಯಾಗಿದ್ದಾರೆ.
ಗೋಶ್ಬುಗ್ ಪ್ರದೇಶದ ನಿವಾಸಿ ಮನ್ಸೂರ್ ಅಹ್ಮದ್ ಬಂಗ್ರೂ ಗುಂಡಿನ ದಾಳಿಗೆ ಬಲಿಯಾದವರು.
‘ಪಠಣ್ನ ರಾಖ್ ಪ್ರದೇಶ ಹಣ್ಣಿನ ತೋಟವೊಂದರಲ್ಲಿ ಗುಂಡಿನ ದಾಳಿಗೆ ಒಳಗಾಗಿ ಬಿದ್ದಿದ್ದ ಮನ್ಸೂರ್ ಅವರು ಆಸ್ಪತ್ರೆಗೆ ಕರೆತರುವ ವೇಳೆಗೆ ಮೃತಪಟ್ಟಿದ್ದರು’ ಎಂದು ವೈದ್ಯರು ತಿಳಿಸಿದ್ದಾರೆ.
#Terrorists fired upon & #killed one Manzoor Ahmad Bangroo (an Independent #Sarpanch) at Goshbugh area of Pattan, #Baramulla. Area has been cordoned off & search to track the involved #terrorists is in progress. Further details shall follow.@JmuKmrPolice
‘ಬಾರಾಮುಲ್ಲದ ಪಠಣ್ ಪ್ರದೇಶದಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಸ್ವತಂತ್ರ ಸರಪಂಚರೊಬ್ಬರು ಮೃತಪಟ್ಟಿದ್ದು, ದಾಳಿಯ ಪ್ರದೇಶವನ್ನು ಸುತ್ತುವರೆಯಲಾಗಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.