ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ‘ಭಾರತ್ ಬಂದ್‘ಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸತ್ಯಾಗ್ರಹ‘ ಎನ್ನುವುದು ದೌರ್ಜನ್ಯ, ಅನ್ಯಾಯ ಮತ್ತು ದುರಹಂಕಾರವನ್ನು ಕೊನೆಗೊಳಿಸುವುದಾಗಿ ಭಾರತದ ಇತಿಹಾಸ ತೋರಿಸಿದೆ‘ ಎಂದು ಹೇಳಿದ್ದಾರೆ.