‘ಮಿತ್ರಕಾಲ್–2’ ಸರಣಿಯ ಹಿನ್ನೆಲೆಯಲ್ಲಿ ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ‘ಅದಾನಿ ಸಮೂಹದ ಷೇರು ಮೌಲ್ಯ ಕುಸಿತದಿಂದಾಗಿ ಎಲ್ಐಸಿಗೆ ಪ್ರತಿ ದಿನ ಸುಮಾರು ₹1 ಸಾವಿರ ಕೋಟಿ ಮೊತ್ತ ನಷ್ಟವಾಗುತ್ತಿದೆ. ಉದ್ಯಮಿ ಗೌತಮ್ ಅದಾನಿಯ ಸಮೂಹದಲ್ಲಿ ಹೂಡಿಕೆ ಮಾಡುವಂತೆ ಎಸ್ಬಿಐ ಹಾಗೂ ಎಲ್ಐಸಿಯನ್ನು ಬಲವಂತಪಡಿಸಿದ್ದು ಯಾರು ಎಂಬ ಪ್ರಶ್ನೆಯನ್ನು ಈ ದೇಶದ ಜನರು ಕೇಳುತ್ತಿದ್ದಾರೆ’ ಎಂದಿದ್ದಾರೆ.