ನವದೆಹಲಿ: 2012 ರಲ್ಲಿ ದೆಹಲಿಯ ಛಾವ್ಲಾ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮೂವರನ್ನು ಸುಪ್ರೀಂ ಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.
ಮೂವರು ಪುರುಷರು 2012ರ ಫೆಬ್ರುವರಿಯಲ್ಲಿ ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದರು. ಅಪಹರಣಗೊಂಡ ಮೂರು ದಿನಗಳ ನಂತರ ಆಕೆಯ ವಿರೂಪಗೊಂಡ ದೇಹ ಪತ್ತೆಯಾಗಿತ್ತು.
2014 ರಲ್ಲಿ, ವಿಚಾರಣಾ ನ್ಯಾಯಾಲಯ ಮೂವರಿಗೆ ಮರಣದಂಡನೆ ವಿಧಿಸಿತ್ತು.ನಂತರ ಈ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು.