ರಾಜೇಶ್ಗೌಡ ಅವರು ಚುನಾವಣಾ ಅಕ್ರಮಗಳನ್ನು ಎಸಗಿರುವುದರಿಂದ ಅವರ ಆಯ್ಕೆ ರದ್ದುಪಡಿಸಿ, ಎರಡನೇ ಸ್ಥಾನ ಪಡೆದ ತಮ್ಮನ್ನು ವಿಜೇತರಾಗಿ ಘೋಷಿಸುವಂತೆ ಜಯಚಂದ್ರ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದರು.2021ರ ಜೂನ್ 18ರಂದು ಅವರ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ ಆದೇಶಿಸಿತ್ತು. ಈ ಆದೇಶದ ಸಿಂಧುತ್ವ ಪ್ರಶ್ನಿಸಿ,ಚುನಾವಣಾ ದುಷ್ಕೃತ್ಯಗಳ ಬಗ್ಗೆ ಜಯಚಂದ್ರ ಅವರು ತಮ್ಮ ಅರ್ಜಿಯಲ್ಲಿ ದನಿ ಎತ್ತಿದ್ದಾರೆ.