‘ನೋಯ್ಡಾದಿಂದ ದೆಹಲಿಗೆ ತೆರಳಲು ಸಾಮಾನ್ಯವಾಗಿ 20 ನಿಮಿಷವಾಗುತ್ತದೆ. ಆದರೆ, ಈ ಮಾರ್ಗದಲ್ಲಿ ದಿಗ್ಬಂಧನ ಇರುವುದರಿಂದಾಗಿ ಈಗ 2 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ, ನೋಯ್ಡಾದಿಂದ ದೆಹಲಿಗೆ ಪ್ರಯಾಣ ಮಾಡುವುದು ದುಃಸ್ವಪ್ನದಂತಾಗಿದೆ’ ಎಂದು ದೂರಿ ಮೋನಿಕಾ ಅಗರ್ವಾಲ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.