ಕೇರಳ ಸರ್ಕಾರವನ್ನು ಪ್ರತಿನಿಧಿಸಿದ ವಕೀಲ ಜೈದೀಪ್ ಗುಪ್ತಾ ಅವರು, ವಿಚಾರಣೆ ಪೂರ್ಣಗೊಳಿಸಲು ಈಗಿರುವ ಗಡುವು ಫೆಬ್ರುವರಿ 16ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಪೀಠವು ಮನವಿಯನ್ನು ತಿರಸ್ಕರಿಸಿ, ಕಾಲಾವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.