ನವದೆಹಲಿ: ‘ಚುನಾವಣಾ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ‘ಉಚಿತ ಕೊಡುಗೆ’ಗಳನ್ನು ಪ್ರಕಟಿಸುತ್ತಿದ್ದು, ಇದರಿಂದ ಆಗಬಹುದಾದ ಪರಿಣಾಮದ ಕುರಿತ ಅಧ್ಯಯನಕ್ಕೆ ಸಮಿತಿಯೊಂದನ್ನು ಏಕೆ ರಚಿಸಬಾರದು. ಈ ಸಂಬಂಧ ಸರ್ವಪಕ್ಷಗಳ ಸಭೆ ನಡೆಸಲು ಏಕೆ ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರವನ್ನು ಕೇಳಿದೆ.