‘39 ಕಂಪನಿಗಳು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಕಾರಿಕೆ ನಡೆಸಲು ಲೀಸ್ ಪಡೆದಿದ್ದು, ಅವುಗಳ ಪರವಾನಗಿ ಅವಧಿ ಕಳೆದ ವರ್ಷ ಮಾರ್ಚ್ 20ಕ್ಕೆ ಮುಕ್ತಾಯಗೊಂಡಿದೆ. ಪರವಾನಗಿ ಅವಧಿ ಮುಗಿವ ಮುನ್ನವೇ ಅಂದಾಜು 23.72 ಲಕ್ಷ ಮೆಟ್ರಿಕ್ ಟನ್ನಷ್ಟು ಕಬ್ಬಿಣದ ಅದಿರನ್ನು ಅಗೆದು ಹೊರತೆಗೆಯಲಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.