ಪ್ರಯಾಗರಾಜ್ ಮತ್ತು ಕಾನ್ಪುರದಲ್ಲಿನ ಕಟ್ಟಡ ನೆಲಸಮ ಕಾರ್ಯಾಚರಣೆಗಳು ಕಾನೂನುಬಾಹಿರ. ಅವುಗಳಿಗೆ ತಡೆ ನೀಡಿ ಎಂದು ಜಮೀಯತ್ ಉಲೇಮಾ ಇ ಹಿಂದ್ ಸಂಘಟನೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿಕ್ರಮನಾಥ್ ಅವರಿದ್ದ ಪೀಠವು ಹೀಗೆ ಹೇಳಿದೆ. ಜತೆಗೆ, ‘ನೆಲಸಮ ಕಾರ್ಯಾಚರಣೆಗಳಿಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು’ ಎಂದು ಪೀಠವು ಹೇಳಿದೆ.