ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ‘ ಈಗಾಗಲೇ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸುವ ಮನವಿ ತಿರಸ್ಕರಿಸಿರುವುದರಿಂದ, ಪುನಃ ಆ ಮನವಿ ಸಲ್ಲಿಸುವುದಿಲ್ಲ‘ ಎಂದು ಹೇಳಿದರು. ಇದೇ ವೇಳೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಎನ್ಇಇಟಿ– ಪರೀಕ್ಷೆ ಅಕ್ರಮಗಳ ಕುರಿತು ದಾಖಲಾಗಿರುವ ಎಫ್ಐಆರ್ ಗಳನ್ನು ಸಲ್ಲಿಸಿದರು. ಈ ವಿಷಯದ ಕುರಿತು ಸತ್ಯಶೋಧನೆ ವರದಿಗಾಗಿ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಕೇಳಿದರು.