ಅರ್ಜಿದಾರರ ಪರವಾಗಿ ಹಿರಿಯ ವಕೀಲ ಬಸವ ಪ್ರಭು ಎಸ್ ಪಾಟೀಲ ಮತ್ತು ವಕೀಲರಾದ ಚಿನ್ಮಯ್ ದೇಶಪಾಂಡೆ ಮತ್ತು ಅನಿರುದ್ಧ್ ಸಂಗನೇರಿಯಾ ಅವರು ಹಾಜರಿದ್ದರು. ಉಪಲೋಕಾಯುಕ್ತರ ಪರವಾಗಿ ವಕೀಲರಾದ ಶೈಲೇಶ್ ಮಡಿಯಾಳ್ ಮತ್ತು ನಿಶಾಂತ್ ಪಾಟೀಲ್ ಹಾಜರಿದ್ದು, ‘ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ’ ಎಂಬುದನ್ನು ಪೀಠದ ಗಮನಕ್ಕೆ ತಂದರು.ಇದೇ ಸಂದರ್ಭದಲ್ಲಿ ಪೀಠವು ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಇಲಾಖಾ ವಿಚಾರಣೆಯನ್ನು ಕೈಗೊಳ್ಳಬಾರದು ಎಂದು ಪೀಠವು ತಿಳಿಸಿತು.