ಪಕ್ಷದಲ್ಲಿ ತಮ್ಮ ಒಂದು ಕಾಲದ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರನ್ನು ಉಲ್ಲೇಖಿಸಿದ ರಾಹುಲ್, ಮಧ್ಯಪ್ರದೇಶದಲ್ಲಿ ಕಳೆದ ವರ್ಷ ಕಾಂಗ್ರೆಸ್ ತೊರೆದು ಸಿಂಧಿಯಾ ಬಿಜೆಪಿ ಸೇರಿದರು. ಈಗ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರು. ಆರ್ಎಸ್ಎಸ್ ಭಯವಿರುವವರು ಪಕ್ಷ ತ್ಯಜಿಸಲು ಸ್ವತಂತ್ರರಿದ್ದಾರೆ. ಹಾಗೆಯೇ ಸಂಘಪರಿವಾರದ ವಿರುದ್ಧ ಧೈರ್ಯವಾಗಿ ಹೋರಾಡುವ ಹೊರಗಿನ ನಿರ್ಭೀತ ನಾಯಕರನ್ನು ಪಕ್ಷ ಸೇರಿಸಿಕೊಳ್ಳಲಿದೆ ಎಂದು ಹೇಳಿದರು.