ಪ್ರಾಥಮಿಕ ತನಿಖೆ ಪ್ರಕಾರ, ಮಾರ್ಚ್ 13ರಂದು ನವದೆಹಲಿ–ಡೆಹ್ರಾಡೂನ್ ನಡುವಣ ಶತಾಬ್ದಿ ಎಕ್ಸ್ಪ್ರೆಸ್ನ ಎಸ್5 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಿಡಿ ಇದ್ದ ಸಿಗರೇಟು ಅಥವಾ ಬೀಡಿಯನ್ನು ಶೌಚಾಲಯದ ಕಸದಬುಟ್ಟಿಗೆ ಎಸೆದಿರುವುದು ಕಾರಣ. ಇದು, ಅಲ್ಲಿನ ಟಿಷ್ಯೂ ಕಾಗದದ ಜೊತೆಗೆ ಸಂಪರ್ಕಕ್ಕೆ ಬಂದು ಬೆಂಕಿ ಹೊತ್ತಿಕೊಂಡಿದೆ.