16 ಮಂದಿ ಸೈನಿಕರ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಿಕ್ಕಿಂನ ಗ್ಯಾಂಗ್ಟಕ್ಗೆ ಸೇನಾ ವಾಹನಗಳಲ್ಲಿ ಮೃತದೇಹಗಳನ್ನು ತರಲಾಗಿತ್ತು. ಈ ವೇಳೆ ಸಿಕ್ಕಿಂನ ರಾಜ್ಯಪಾಲ ಗಂಗಾ ಪ್ರಸಾದ್, ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್, ತ್ರಿಶಕ್ತಿ ವಿಭಾಗದ ಜನರಲ್ ಕಮಾಂಡರಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ ವಿಪಿಎಸ್ ಕೌಶಿಕ್, ಸೇನಾ ಹಾಗೂ ವಾಯು ಪಡೆಯು ಅಧಿಕಾರಿಗಳು ಸೈನಿಕರಿಗೆ ನಮನ ಸಲ್ಲಿಸಿದರು.