ಫತೇಪುರ: ‘ಉತ್ತರಪ್ರದೇಶದ ಗಂಗಾನದಿಯಲ್ಲಿ ಮತ್ತೆ ಆರು ಶವಗಳು ತೇಲಿಬಂದಿದ್ದು, ಇವುಗಳು ಕೋವಿಡ್ ಪೀಡಿತರ ಶವಗಳೆಂದು ಶಂಕಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
‘ನದಿಯಲ್ಲಿ ಶವಗಳು ತೇಲುತ್ತಿವೆ ಎಂಬುದರ ಬಗ್ಗೆ ನನಗೆ ಭಾನುವಾರ ಬೆಳಿಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ನದಿಯಲ್ಲಿ ಆರು ಕೊಳೆತಿರುವ ಶವಗಳು ಸಿಕ್ಕಿವೆ’ ಎಂದು ಫತೇಪುರ ಸದರ್ನ ಉಪವಿಭಾಗಾಧಿಕಾರಿ ಪ್ರಮೋದ್ ಜಾ ಹೇಳಿದರು.
‘ಈ ಶವಗಳು ಕೊಳೆತಿರುವುದರಿಂದ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇವುಗಳು ಬಹಳ ದೂರದಿಂದ ತೇಲಿ ಬಂದಿರುವಂತೆ ಕಾಣುತ್ತಿದೆ’ ಎಂದು ತಿಳಿಸಿದರು.
ಈ ತಿಂಗಳು ಬಲಿಯಾದ ನಾರಾಹಿ ಪ್ರದೇಶದ ಉಜಿಯಾರ್, ಕುಲ್ಹಡಿಯಾ, ಭರೌಲಿ ಘಾಟ್ಗಳಲ್ಲಿ 52 ಶವಗಳು ತೇಲಿ ಬಂದಿದ್ದವು.