ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಗಂಗಾನದಿಯಲ್ಲಿ ಮತ್ತೆ ತೇಲಿ ಬಂದ ಆರು ಶವಗಳು

Last Updated 31 ಮೇ 2021, 8:06 IST
ಅಕ್ಷರ ಗಾತ್ರ

ಫತೇಪುರ: ‘ಉತ್ತರಪ್ರದೇಶದ ಗಂಗಾನದಿಯಲ್ಲಿ ಮತ್ತೆ ಆರು ಶವಗಳು ತೇಲಿಬಂದಿದ್ದು, ಇವುಗಳು ಕೋವಿಡ್‌ ಪೀಡಿತರ ಶವಗಳೆಂದು ಶಂಕಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

‘ನದಿಯಲ್ಲಿ ಶವಗಳು ತೇಲುತ್ತಿವೆ ಎಂಬುದರ ಬಗ್ಗೆ ನನಗೆ ಭಾನುವಾರ ಬೆಳಿಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ನದಿಯಲ್ಲಿ ಆರು ಕೊಳೆತಿರುವ ಶವಗಳು ಸಿಕ್ಕಿವೆ’ ಎಂದು ಫತೇಪುರ ಸದರ್‌ನ ಉಪವಿಭಾಗಾಧಿಕಾರಿ ಪ್ರಮೋದ್‌ ಜಾ ಹೇಳಿದರು.

‘ಈ ಶವಗಳು ಕೊಳೆತಿರುವುದರಿಂದ ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇವುಗಳು ಬಹಳ ದೂರದಿಂದ ತೇಲಿ ಬಂದಿರುವಂತೆ ಕಾಣುತ್ತಿದೆ’ ಎಂದು ತಿಳಿಸಿದರು.

ಈ ತಿಂಗಳು ಬಲಿಯಾದ ನಾರಾಹಿ ಪ್ರದೇಶದ ಉಜಿಯಾರ್‌, ಕುಲ್ಹಡಿಯಾ, ಭರೌಲಿ ಘಾಟ್‌ಗಳಲ್ಲಿ 52 ಶವಗಳು ತೇಲಿ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT