ನವದೆಹಲಿ: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾದ ಭಾರತದ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಷ್ ಸಿದ್ಧಿಕಿ ಅವರ ಪೋಷಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಡ್ಯಾನಿಷ್ ಅವರ ಸಾವಿಗೆ ಕಾರಣರಾದ ಉನ್ನತ ಮಟ್ಟದ ಕಮಾಂಡರ್ಗಳು ಮತ್ತು ತಾಲಿಬಾನ್ ಸರ್ಕಾರದ ನಾಯಕರನ್ನು ಕಾನೂನು ವ್ಯಾಪ್ತಿಗೆ ತಂದು ಶಿಕ್ಷೆಗೆ ಗುರಿಪಡಿಸಲು ಡ್ಯಾನಿಷ್ ಪೋಷಕರು ನಿರ್ಧರಿಸಿದ್ದಾರೆ.