ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸಂಸತ್ತು ಅಂಗೀಕರಿಸಿರುವ ಬೆಲೆ ಖಾತರಿ ಹಾಗೂ ಬೇಸಾಯ ಸೇವೆಗಳಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಮಸೂದೆಯು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ಇನ್ನಷ್ಟು ಮುಕ್ತ ಅವಕಾಶಗಳನ್ನು ಕಲ್ಪಿಸುತ್ತದೆ. ಹೊಸ ಕೃಷಿ ಮಸೂದೆಯು ರೈತರನ್ನು ಹಲವು ನಿರ್ಬಂಧಗಳಿಂದ ಮುಕ್ತವಾಗಿಸಲಿದೆ. ಉತ್ತಮ ದರ ಸಿಕ್ಕರೆ ಹೊಲದಲ್ಲೇ ಮಾರಾಟ ಮಾಡಬಹುದು. ಸಂಸ್ಕರಣಾ ಘಟಕಕ್ಕೂ ಮಾರಾಟ ಮಾಡಬಹುದು. ಸಾಗಣೆಯ ನಿರ್ಬಂಧವಿಲ್ಲದೆ ಹೊರ ರಾಜ್ಯಗಳಿಗೂ ಮಾರಾಟ ಮಾಡಬಹುದು’ ಎಂದಿದ್ದಾರೆ.