ಲಖನೌ: ತಾಲಿಬಾನ್ನಂತಹ ಉಗ್ರ ಸಂಘಟನೆಗಳಿಗೆ ದೇಶದ ಕೆಲವರು ಬೆಂಬಲ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದುಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಮೂರನೇ ದಿನ ಮಾತನಾಡಿದ ಯೋಗಿ, ʼಕೆಲವರು ತಾಲಿಬಾನ್ ಅನ್ನು ಬೆಂಬಲಿಸುತ್ತಿದ್ದಾರೆ. ಅಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆಎಂಥಾಕ್ರೌರ್ಯವೆಸಗಲಾಗಿದೆ? ಆದರೆ, ಕೆಲವರು ನಾಚಿಗೆಯಿಲ್ಲದೆ ತಾಲಿಬಾನ್ಗೆ ಬೆಂಬಲ ನೀಡುತ್ತಿದ್ದಾರೆ. ಈ ಎಲ್ಲಾ ಮುಖಗಳು ಬಯಲಾಗಬೇಕುʼ ಎಂದು ಹೇಳಿದ್ದಾರೆ.
ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆಯಲು ತಾಲಿಬಾನ್ ನಡೆಸುತ್ತಿರುವ ಸಂಘರ್ಷವನ್ನುʼಸ್ವಾತಂತ್ಯ್ರ ಹೋರಾಟʼವೆಂದು ಬಣ್ಣಿಸಿದ್ದ ಉತ್ತರ ಪ್ರದೇಶ ಸಂಸದ ಶಫಿಕುರ್ ರಹಮಾನ್ ಬರ್ಗ್ಹಾಗೂ ಇನ್ನಿಬ್ಬರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.
ಅಫ್ಗಾನಿಸ್ತಾನದಲ್ಲಿನ ಆಡಳಿತ ಬದಲಾವಣೆಯನ್ನು ಬೆಂಬಲಿಸಿದ್ದ ಬರ್ಗ್, ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್ಹೋರಾಟ ನಡೆಸುತ್ತಿದೆ. ಅಫ್ಗನ್ನರು ತಾಲಿಬಾನ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಸಮಾಜವಾದಿ ಪಕ್ಷದವರಾದ ಬರ್ಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್124ಎ (ದೇಶದ್ರೋಹ),ಸೆಕ್ಷನ್ 153ಎ (ದ್ವೇಷಕ್ಕೆ ಉತ್ತೇಜನ) ಮತ್ತುಸೆಕ್ಷನ್ 295ಎಅಡಿಯಲ್ಲಿ (ಧಾರ್ಮಿಕ ಭಾವನೆಗಳಿಗೆ ದಕ್ಕೆ) ಪ್ರಕರಣ ದಾಖಲಾಗಿದೆ.
ವಿಧಾನಸಭೆಯಲ್ಲಿ ಮಾತು ಮುಂದುವರಿಸಿದ ಯೋಗಿ,ʼಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಜನರ ತಲಾದಾಯವನ್ನು ದ್ವಿಗುಣಗೊಳಿಸಲಾಗಿದೆʼ ಎಂದು ಹೇಳಿಕೊಂಡಿದ್ದಾರೆ.
ʼ2017ರಲ್ಲಿ ಸರ್ಕಾರವು ಬಜೆಟ್ ಮಂಡಿಸಿತ್ತು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಮತ್ತು ನಂಬಿಕೆ ಎಲ್ಲರಿಗಾಗಿ ಎಂಬ ಪ್ರಜ್ಞೆ ಹೊಂದಿದ್ದಾರೆ. ಇದು ನಮ್ಮ ಸಂಸ್ಕೃತಿ. ಪಂಡಿತ್ ದೀನ ದಯಾಳ್ ಉಪಾದ್ಯಾಯರು ಸಮಾಜದಿಂದಲೂ ಇದನ್ನು ನಿರೀಕ್ಷಿಸುತ್ತಿದ್ದರು. ನಮ್ಮ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಯೋಜನೆಗಳ ಪ್ರಯೋಜನಗಳನ್ನು ಒದಗಿಸಿದೆʼ ಎಂದಿದ್ದಾರೆ.
ʼಕಳೆದ ನಾಲ್ಕು ವರ್ಷಗಳಲ್ಲಿ ಬಜೆಟ್ನ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ.24 ಕೋಟಿ ಜನರಿಗಾಗಿ ಸಣ್ಣ ಗಾತ್ರದ ಬಜೆಟ್ ಮಂಡಿಸುವುದು ಸಣ್ಣ ಮನಸ್ಥಿತಿಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವನ್ನೂ ಓದಿ
*ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಗುಂಡಿನ ದಾಳಿ ಮತ್ತು ಕಾಲ್ತುಳಿತದಲ್ಲಿ ಹಲವರ ಸಾವು
*ತಾಲಿಬಾನಿಗಳ ಕೈವಶದ ನಂತರ ಕಾಬೂಲ್ನಲ್ಲಿ ಮಹಿಳೆಯರ ಚಿತ್ರಗಳ ಧ್ವಂಸ
*ತಾಲಿಬಾನ್ ವಶವಾದ ಅಫ್ಗಾನಿಸ್ತಾನದಲ್ಲಿ ಭೂಕಂಪ
*ತಾಲಿಬಾನ್ ಕಪಿಮುಷ್ಠಿಯಲ್ಲಿ ಅಫ್ಗಾನಿಸ್ತಾನ: ಎದುರಾಗಲಿದೆಯಂತೆ ಭೀಕರ ಆಹಾರ ಸಮಸ್ಯೆ
*ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಹಿಡಿದು ತಾಲಿಬಾನಿಗಳ ಪರೇಡ್
*ಅಫ್ಗಾನಿಸ್ತಾನದಿಂದ ತಾಯ್ನಾಡಿಗೆ ಮರಳಿದ ತಂತ್ರಜ್ಞ
*ಯಾವುದೇ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ: ತಾಲಿಬಾನ್
*ʼಅಫ್ಗಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್ ಹೋರಾಟʼ ಎಂದ ಎಸ್ಪಿ ಸಂಸದ
*ಅಫ್ಗನ್ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
*ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
*ಅಫ್ಗನ್ ಸಂಘರ್ಷವನ್ನು ಬಿಂಬಿಸುವ ನೋಡಲೇಬೇಕಾದ 5 ಸಿನಿಮಾಗಳಿವು...
*ಅಮೆರಿಕದ ಜೈಲಿನಲ್ಲಿ 8 ವರ್ಷಗಳ ಕಾಲ ಬಂಧನದಲ್ಲಿದ್ದೆ: ತಾಲಿಬಾನ್ ಅಧಿಕಾರಿ ರುಹಾನಿ
*ಅಫ್ಗಾನಿಸ್ತಾನದ ರಾಜಕೀಯರ ನಾಯಕರುಗಳೊಂದಿಗೆ ತಾಲಿಬಾನ್ ಮಾತುಕತೆ
*ಕಾಬೂಲ್ನ ಅಮ್ಯೂಸ್ಮೆಂಟ್ ಪಾರ್ಕ್ಗೆ ನುಗ್ಗಿ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.