ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿರುವ ಕೆಲವರು ‘ಯುಪಿಎ –II' ರಚನೆಯ ಸಿದ್ಧತೆಯಲ್ಲಿದ್ದಾರೆ: ಸಂಜಯ್ ರಾವತ್

ಶಿವಸೇನಾ ಮುಖಂಡ ಸಂಜಯ್ ರಾವತ್‌
Last Updated 26 ಮಾರ್ಚ್ 2021, 11:37 IST
ಅಕ್ಷರ ಗಾತ್ರ

ಮುಂಬೈ: 'ದೆಹಲಿಯಲ್ಲಿರುವ ಕೆಲವರು ಯುಪಿಎ-II ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಈಗ ಅಸ್ತಿತ್ವದಲ್ಲಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್‌ ಶುಕ್ರವಾರ ಹೇಳಿದ್ದಾರೆ.

‘ಮೂರು, ನಾಲ್ಕು ಅಥವಾ ಐದನೇ ರಂಗಗಳನ್ನು ರಚಿಸುವಂತಹ ನಾಟಕಗಳೆಲ್ಲ ವಿಫಲವಾಗಿವೆ. ಆದ್ದರಿಂದ ಅಸ್ತಿತ್ವದಲ್ಲಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ‘ ಎಂದು ಹೇಳಿದ್ದಾರೆ.

‘ದೆಹಲಿಯಲ್ಲಿರುವ ಕೆಲವರು ಮತ್ತೊಂದು ಯುಪಿಎ-II ರಚನೆಯ ಸಿದ್ಧತೆಯಲ್ಲಿದ್ದಾರೆ. ಆ ಕಾರಣದಿಂದ ಯುಪಿಎ–I ಅನ್ನು ಬಲಪಡಿಸಬೇಕೆಂದು ಕಳಕಳಿಯಿಂದ ಹೇಳುತ್ತಿದ್ದೇನೆ‘ ಎಂದು ಹೇಳಿದ ರಾವತ್ ಅವರು, ‘ದೆಹಲ್ಲಿಯಲ್ಲಿರುವ ಕೆಲವರು‘ ಯಾರು ಎಂದು ನಿರ್ದಿಷ್ಟವಾಗಿ ಹೇಳಲಿಲ್ಲ.

‘ಒಂದು ಪಕ್ಷ ಯುಪಿಎ–II ರಚನೆಯಾದರೆ ಈಗಿರುವ ಯುಪಿಎಗಿರುವ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಆಗ ವಿರೋಧ ಪಕ್ಷಗಳ ಶಕ್ತಿಯೂ ಕುಂದುತ್ತದೆ‘ ಎಂದು ರಾವತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT