‘ಅದಾಗ್ಯೂ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗಡಿ ವಿಷಯದ ಕುರಿತು ಚರ್ಚಿಸಲು ಮೊಂಡುತನದಿಂದ ನಿರಾಕರಿಸುತ್ತದೆ.ಇದರ ಪರಿಣಾಮವಾಗಿ, ಸಂಸತ್ತು, ರಾಜಕೀಯ ಪಕ್ಷಗಳು ಮತ್ತು ಜನರು ನೈಜ ಪರಿಸ್ಥಿತಿಯ ಬಗ್ಗೆ ಅಜ್ಞಾನದಲ್ಲಿದ್ದಾರೆ.ಗಂಭೀರ ಕಾಳಜಿಯ ವಿಷಯಗಳ ಬಗ್ಗೆ ಮೌನವು ಈ ಸರ್ಕಾರದ ವಿಶಿಷ್ಟ ಲಕ್ಷಣವಾಗಿರುವುದು ದುರದೃಷ್ಟಕರ. ಪ್ರತಿಪಕ್ಷಗಳು ಸೇರಿದಂತೆ ಯಾವುದೇ ಪ್ರಶ್ನಿಸುವ ಧ್ವನಿಯನ್ನು ತಡೆಯುವಲ್ಲಿ ಸರ್ಕಾರವು ಪಾತ್ರ ವಹಿಸುತ್ತಿದೆ. ಅಷ್ಟೇ ಅಲ್ಲ, ಮಾಧ್ಯಮಗಳನ್ನು ಕೌಶಲದಿಂದ ನಿರ್ವಹಿಸುತ್ತಿದೆ. ಇದು ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲದೇ, ಆ ಪಕ್ಷದ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿಯೂ ಇದೇ ರೀತಿಯ ಸ್ಥಿತಿ ಇದೆ’ ಎಂದು ಆರೋಪಿಸಿದ್ದಾರೆ.