‘ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ರಕ್ಷಣಾ ಸಚಿವರಾಗಿದ್ದರು. ಆದರೆ, ಅವರು ಯಾವಾಗಲೂ ತಳಮಟ್ಟದ ನಾಯಕರಾಗಿಯೇ ಉಳಿದಿದ್ದರು. ಬಡವರ ಏಳಿಗೆಗಾಗಿ ದುಡಿದವರು. ಅವರ ನಿಧನದಿಂದ ಇಡೀ ದೇಶ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಕೋಟ್ಯಂತರ ಬೆಂಬಲಿಗರು ಮತ್ತು ಸಮಾಜವಾದದ ಪ್ರತಿಪಾದಕರ ಭಾವನೆಗೆ ಬೆಲೆ ಕೊಟ್ಟು ಕೂಡಲೇ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಬೇಕು’ಎಂದು ಅವರು ಒತ್ತಾಯಿಸಿದ್ದಾರೆ.